Feedback / Suggestions

Chairman's Preface

ಮಾಜಿ ಅಧ್ಯಕ್ಷರ ಮುನ್ನುಡಿ

ಕೋಟಿ ವಿದ್ಯೆಗಳಿಗಿಂತಲೂ ಮೇಟಿ ವಿದ್ಯೆಯೇ ಮೇಲುಮೇಟಿಯಿಂ ರಾಟಿ ನಡೆದುದಲ್ಲದೇ ದೇಶದಾಟವೇ?”
ಸರ್ವಜ್ಞ

ಕೃಷಿ ಕೃತ್ಯ ಕಾಯಕ ಮಾಡುವ ಪರಮಸದ್ಭಕ್ತನ ಪಾದವತೋರಯ್ಯ ಎನೆಗೆಅದೆಂತೆಂದೊಡೆ ಆತನ ತನು ಶುದ್ಧಆತನ ಮನ ಶುದ್ಧಆತನ ಧನ ಶುದ್ಧಅಂತಪ್ಪ ಪರಮಸದ್ಭಕ್ತನ ಮನೆಯ ಹೊಕ್ಕು ಪೂಜೆಯ ಮಾಡಿದ ಜಂಗಮವೇ ಪಾವನ ಕೂಡಲಸಂಗಮದೇವಾ”- ಬಸವಣ್ಣನವರು

ನೇಗಿಲ ಯೋಗಿ - ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೇ ನಿಂತಿದೆ ಧರ್ಮ” – ರಾಷ್ಟ್ರಕವಿ ಕುವೆಂಪುರವರು

ಒಕ್ಕಲುತನ ಬೇಸಾಯ, ಆರಂಭ ಮುಂತಾದ ಪದಗಳಿಂದ ಕರೆಯುವ ಶ್ರಮಸಂಸ್ಕøತಿಯ ಪ್ರತೀಕವೇ ಕೃಷಿ. ಒಕ್ಕಲುತನವು ರೈತ – ಕಾರ್ಮಿಕ – ಆಯಗಾರರನ್ನೊಳಗೊಂಡ ಮೂರು ತಾಳಿನ ಕೂರಿಗೆಯಂತೆ ಸಂಘಟಿತ ಶ್ರಮ. ಒಕ್ಕಲುತನವು ಮಳೆ, ಗಾಳಿ, ಬಿಸಿಲು ಜೊತೆಗೆ ಹವಮಾನ ವೈಪರೀತ್ಯಗಳಾದ ಅನಾವೃಷ್ಟಿ, ಅತೀವೃಷ್ಟಿಯಂತಹ ಗಂಡಾಂತರಗಳಿಗೆ ಎದೆಯೊಡ್ಡಿ ನಿಲ್ಲಬೇಕಾಗುತ್ತದೆ. ಅದೇ ರೀತಿ ಮಾರುಕಟ್ಟೆ ಬೆಲೆ ಏರಿಳಿತದಂತಹ ಗಂಡಾಂತರಗಳಿಗೂ ಎದೆಯೊಡ್ಡಿ ನಿಲ್ಲಬೇಕಾಗುತ್ತದೆ. ಬಂದೊದಗಬಹುದಾದ ಗಂಡಾಂತರ ಪರಿಹಾರೋಪಾಯಗಳೊಂದಿಗೆ ಬಲಿಷ್ಟ ರೈತ ಸುಸ್ಥಿರ ಕೃಷಿ ನಿರ್ಮಿಸುವ ಧ್ಯೇಯೋದೇಶದೊಂದಿಗೆ ಕರ್ನಾಟಕ ಸರ್ಕಾರ ಕೃಷಿ ಬೆಲೆ ಆಯೋಗ ರಚನೆ ಮಾಡಿದ್ದು, ಅದರಂತೆ ಕೃಷಿ ಬೆಲೆ ಆಯೋಗ ಕಾರ್ಯ ನಿರ್ವಹಿಸುತ್ತಿದೆ.
ಶ್ರೀ.ಹನುಮನಗೌಡ ಬೆಳಗುರ್ಕಿ

 

ಮಾಜಿ ಅಧ್ಯಕ್ಷರ ಮುನ್ನುಡಿ

ಸ್ಥಿರ ಆದಾಯ ಆ ಮೂಲಕ ಜೀವನ ಭದ್ರತೆಗಳೆಂಬುದು ರೈತನ ವಿಚಾರದಲ್ಲಿ ಎರಡು ಮುಖ್ಯ ಅಂಶಗಳ ಮೇಲೆ ಅವಲಂಬಿತವಾಗಿದೆ. ರೈತ ಕಷ್ಟಪಟ್ಟು ಉತ್ತಿ, ಬಿತ್ತಿ, ಬೆಳೆದ ಫಸಲು ಆತನ ಕೈ ಸೇರಬೇಕು. ಇದು ಉತ್ಪಾದನೆಗೆ ಸಂಬಂಧಿಸಿದ ವಿಚಾರ. ಇನ್ನು ಆ ರೀತಿ ಉತ್ಪಾದಿಸಿದ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗಬೇಕು. ಇದು ಮಾರುಕಟ್ಟೆಗೆ ಸಂಬಂಧಿಸಿದ ವಿಚಾರ. ಉತ್ಪಾದನೆ ವಿಚಾರದಲ್ಲಿ ರೈತ ಮಳೆ, ಹವಾಮಾನ ಒಟ್ಟಾರೆ ನಿಸರ್ಗದ ಕೃಪೆಗೆ ಒಳಗಾಗಿದ್ದರೆ ಬೆಲೆ ವಿಚಾರದಲ್ಲಿ ಆತ ಮಾರುಕಟ್ಟೆ, ಮಧ್ಯವರ್ತಿಗಳ ಕೃಪೆಗೆ ಸಿಲುಕುವಂತಾಗಿರುವನು. ಒಂದರ್ಥದಲ್ಲಿ ರೈತನ ಆದಾಯ ಜೀವನ ಭದ್ರತೆಗಳು ಮಳೆಯೊಡನೆ ಮಾತ್ರವಲ್ಲ ಮಾರುಕಟ್ಟೆಯೊಡನೆಯೂ ಜೂಜಾಡಿ ಪಡೆಯುವಂತಾಗಿರುತ್ತವೆ.
ಡಾಟಿ.ಎನ್ಪ್ರಕಾಶ್ ಕಮ್ಮರಡಿ

Last Updated: 15-09-2022 08:51 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Terms & Conditions

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Karnataka Agricultural Price Commission
Designed and Developed by: Center for e-Governance - Web Portal, Government of Karnataka ©2020, All Rights Reserved.